ಭಯದ ಮಾರಾಟಗಾರ ಟಿವಿ ಆಂಕ್ಯರ್..!

ಭಯದ_ಮಾರಾಟಗಾರ...! ಆಂಕ್ಯರ್ ಅಜಿತ್_ಹನುಮಕ್ಕನವರ್... 
ಸುವರ್ಣ ನ್ಯೂಸ್ ನಲ್ಲಿ " ಸೈನಿಕರ ಸಾವು ಮತ್ತು ರಾಜಕೀಯ"( ಪಾಕಿಸ್ತಾನದ ಜೊತೆ ಯುದ್ಧ ನಡೆದರೆ BJP 22 ಲೋಕಸಭಾ ಸ್ಥಾನಗಳಲ್ಲಿ ಗೆಲ್ಲುತ್ತದೆ ಎಂದು ಹೇಳಿಕೆ ನೀಡಿದ್ದ ಯಡಿಯೂರಪ್ಪ) ಎಂಬ ವಿಷಯದ ಹಿನ್ನೆಲೆಯಲ್ಲಿ ಸಂಜೆ 07-ರಿಂದ 08 ಗಂಟೆ ವರೆಗೆ  ಪ್ಯಾನೆಲ್ ಡಿಸಕ್ಷನ್ ಗೆ ನನ್ನನ್ನು ಕರೆಯಲಾಗಿತ್ತು.
07 ಗಂಟೆಗೆ ನನ್ನ ಜೊತೆಗೆ ಮಾಜಿ ಯೋಧರೊಬ್ಬರು, ಆಂತರಿಕ ಭದ್ರತಾ ಸಲಹೆಗಾರ ....? ಹೆಗಡೆ ಮೂರು ಜನ ಪ್ಯಾನೆಲ್ ಡಿಸಕ್ಷನ್ ನಲ್ಲಿ ಭಾಗವಹಿದ್ದೇವು. 07 ಯಿಂದ 7:50 ವರೆಗೂ ದೆಹಲಿಯಿಂದ Breaking News ಬರುತ್ತಿದೆ ಎಂದು. ನಮ್ಮನ್ನು ಪ್ಯಾನೆಲ್ ನಲ್ಲೇ ಕುರಿಸಿಕೊಂಡು. ಈ ಅಜಿತ್  ವಾಕರಿಕೆ ತರಿಸುವ ರೀತಿಯಲ್ಲಿ  ಅವೇಶದ, ಪ್ರಚೋದಿತಾ.. ಬೆಂಕಿ ಉಗುಳುವ ಬ್ರೇಕಿಂಗ್ ನ್ಯೂಸ್ ವಿಶ್ಲೇಷಣೆ ಶುರು ಮಾಡಿದ.

ಆಗಾಗ ಬ್ರೆಕ್ ಮಧ್ಯೆ ತುಂಬಾ ದಣಿದು ನೀರು ಕುಡಿದು ಸುಧಾರಿಸಿಕೊಳ್ಳುವ ಈತ ಸಹಜವಾಗಿ ಸೌಮ್ಯವಾಗಿಯೇ ಇದ್ದಾನೆ.  ಆದರೆ ಉದ್ದೇಶಪೂರ್ವಕವಾಗಿಯೇ ರೋಚಕವಾಗಿ, ಗಟ್ಟಿ ಧ್ವನಿಯಲ್ಲಿ, ಕಿರುಬನ ರೀತಿ ಕಿರಿಚಾಡುತ್ತಾನೆ.ಈತ ಟಿಆರ್ಪಿ ಗಾಗಿ‌ ಅಥವಾ ಯಾವುದೋ ಕೃತಕ ನಿರ್ದೇಶನದಂತೆ  ಸ್ಟೂಡಿಯೋ ದಲ್ಲಿ ಕಿರುಚಾಡುತ್ತಿರುವುದು ಎಂದು ಸಹಜವಾಗಿ ಅರ್ಥವಾಯಿತು.

ಈತನು ಬ್ರೇಕಿಂಗ್ ನ್ಯೂಸ್ ನಲ್ಲಿ ಓದುವ  ಸ್ಕ್ರೀಪ್ಟ್ ಗಳು RSS ಕಛೇರಿ ಕೇಶವ ಕೃಪಾ ದಲ್ಲಿ ಸಿದ್ದವಾಗಿ ಬರುತ್ತಿರಬಹುದು ಎನ್ನುವಷ್ಟು ಮಟ್ಟಿಗೆ ಈತನ ಮಾಧ್ಯಮ ಭಾಷೆಯ ನಿಖರತೆಯಿಂದ ಸುಳ್ಳನ್ನು ತಲೆಗೆ ಹೊಡೆದಂತೆ ಅರ್ನಾಬ್ ಗೋಸ್ವಾಮಿ, ಸೂಲಿಬೆಲೆ ಚಕ್ರವರ್ತಿ ಗೆ ಸೆಡ್ಡು ಹೊಡೆದವನಂತೆ  ಅವೇಶಭರಿತ, ಮಾತನಾಡುತ್ತಾನೆ.
 ನಾವು ಮೂರು ಜನ ಚರ್ಚೆಯಲ್ಲಿ ಭಾಗವಹಿಸಿದ್ದವರು. ಸುಮಾರು 07ರಿಂದ 7:50 ರ ವರೆಗೂ ಟೀಂ ಕಾಫಿ ಬಿಸ್ಕತ್ ತಿಂದು ನೀರು ಕುಡಿದು ಈ ಅವಿವೇಕಿ ಆಂಕ್ಯರ್ ನ ಬ್ರೇಕಿಂಗ್ ನ್ಯೂಸ್ ವಿಶ್ಲೇಷಣೆ ಯನ್ನು ಎದುರಿಗೆ ಕುಳಿತ ನೋಡಿದ್ದೇ ಆಯಿತು..!

ಕೊನೆಗೆ ಇವತ್ತಿನ ಚರ್ಚೆಯ ವಿಷಯ ( ಸೈನಿಕರ ಸಾವಿನಲ್ಲಿ ಬಿಜೆಪಿ ಯಡಿಯೂರಪ್ಪ ರಾಜಕೀಯ ಲಾಭದ ಹೇಳಿಕೆ ) ಮರೆಮಾಚಿದ Breaking News ಅಬ್ಬರದಲ್ಲಿ ಈ ಚರ್ಚೆಯನ್ನೇ ಸಂಪೂರ್ಣವಾಗಿ ಸೈಡ್ ಲೈನ್ ಮಾಡಿದ.
ಕೊನೆಗೆ
ನಮಗೆ ಮೂರು ಜನರಿಗೆ ಸೇರಿ ಮಾತನಾಡಲು ಕೇವಲ ಹತ್ತು ನೀಡಿದ ಈತ. ಅದರಲ್ಲೂ ಮಧ್ಯೆ ಮಧ್ಯೆ ಬಾಯಿ ಹಾಕಿದ. ನಾವು ಏನನ್ನು ಮಾತನಾಡಬೇಕು ಎಂಬುದನ್ನು ಸಹ ಈತನೇ ನಿರ್ಧರಿಸಿ ಪ್ರಶ್ನೆ ಕೇಳಿದ ಉತ್ತರಿಸು ಮುನ್ನವೇ ಹೌಹಾರಿದ ದಾಟಿಯಲ್ಲಿ ಚರ್ಚೆಯ ಮೂಸೆಯನ್ನು ಡೈವರ್ಟ್ ಮಾಡಿದ.
ಕೊನೆಗೆ ತಾನೇ ತೀರ್ಪು ಬರೆದವನಂತೆ.. ಗಂಡೆದೆಯ ಪ್ರಧಾನಿಗೆ(ಮೋದಿಗೆ) ಎದುರಿ ಪಾಕಿಸ್ತಾನ. ಕಮಾಂಡರ್ ಅಭಿವಂದನ್ ರನ್ನು ಬಿಡುಗಡೆ ಮಾಡುತ್ತಿದೆ ಎಂದು. ಶರಬರೆದಂತೆ ಚರ್ಚೆಯನ್ನು ಸಮಾರೋಪ ಮಾಡಿಯೇ ಬಿಟ್ಟ.
ಚರ್ಚೆಯಲ್ಲಿ ಭಾಗವಹಿಸಿದ ಮೂರು ಜನರಿಗೆ ಧನ್ಯವಾದಗಳು ಎಂದು 08ಗಂಟೆಗೆ ಚರ್ಚೆ ನಿಲ್ಲಿಸಿದ.

ಸ್ಟೂಡಿಯೋ ಲೈವ್ ನಲ್ಲಿ ಪಾಪಿ ಪಾಕಿಸ್ತಾನ, ಇಮ್ರಾನ್ ಖಾನ್ ಅವಿವೇಕಿ, ನಾಟಕ ಆಡುತ್ತಿದ್ದಾನೆ, ಉಗ್ರಗಾಮಿಗಳ ರಕ್ಷಣೆ ಮಾಡುತ್ತಿದ್ದಾರೆ ಎಂದಿದ್ದ ಈತ
ಕೊನೆಗೆ ಪ್ಯಾನೆಲ್ ಡಿಸಕ್ಷನ್ ನಿಂದ ಹೊರಬಂದ ಈ ಉತ್ತರನ ಪೌರುಷದ ವೇಷಧಾರಿ. ಹೊರಗೆ ಬರುವಾಗ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ರವರು ಪ್ರಬುದ್ಧರು ಎಂದು ಸತ್ಯ ಮಾತನಾಡಲು ಶುರುಮಾಡಿದ. ಕ್ಷಣ ಕಾಲ ಶಾಕ್ ಆದೆ ನಾನು.
ಟಿವಿ ಚಾನೆಲ್ ಡಿಸಕ್ಷನ್ ನಲ್ಲಿ RSS, BJP ಯ ವಕ್ತಾರರನ್ನೇ ನಾಚಿಸುವಂತೆ ಮಾತನಾಡುವ  ಇಂತಹವರು ಚಾಲನೆ ಆಂಕ್ಯರ್ ಆಗಿರುವಾಗ BJP ನಾಯಕರಂತೆ ಸೈನಿಕರ ಸಾವು, ಸಾಹಸವನ್ನೆಲ್ಲ 56 ಇಂಚಿನ ನಾಯಕನ ರಾಜಕೀಯ ಲಾಭಕ್ಕಾಗಿ ಈತ ಆಂಕ್ಯರ್ ಎಂಬುದನ್ನು ಮರೆತು ಒಂದು ಪಕ್ಷದ ವಕ್ತಾರನಂತೆ ವಾದ  ಮಂಡಿಸುತ್ತಿರುವುದು ಕೇಶವ ಕೃಪಾ ಪೋಷಿತ, ನಿರ್ದೇಶನ ಎಂದು ಅರ್ಥವಾಗುತ್ತದೆ.

ಏಕೆಂದರೆ ಈ ಸುವರ್ಣ ನ್ಯೂಸ್ BJP ಪಕ್ಷದ ರಾಜ್ಯ ಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಮಾಲೀಕತ್ವದ್ದು.  ಆದ್ದರಿಂದ ಇಲ್ಲಿ ಆಂಕ್ಯರ್ ಆಗಿರಲು ಮುಖ್ಯ ಅರ್ಹತೆ ಆಂಕ್ಯರ್ ಅದವನು ಜನರಲ್ಲಿ ಆಂತಕ, ಯುದ್ಧೋನ್ಮಾದ, ಪ್ರಚೋದಿಸಿ ಭಯದ ಮಾರಾಟ ಮಾಡುತ್ತಿರಬೇಕು. ಇಲ್ಲದಿದ್ದರೆ ಇಲ್ಲಿ ನೈಜ ಆಂಕ್ಯರ್ ಗಳಿಗೆ ಸ್ಥಾನವಿಲ್ಲ ಎನ್ನುವುದರಿಂದ ಅಜಿತ್ ಹನುಮಕ್ಕನವರ್ ರಂತವರು ಭಯದ ಮಾರಾಟಗಾರರು ಆಗಿದ್ದರೇನೇ ಉಳಿಗಾಲ. ಇಲ್ಲದಿದ್ದರೆ ಭಯದ ಅಂಗಡಿಗಳ ಮಾರ್ವಾಡಿ ಮಾಲೀಕರು ಸಮಾಧಾನ ಆಗಲಾರರು.

 ಈತನ ಈ ಕೃತಕ ಮುಖವಾಡ ಜನರಿಗೆ ಅರ್ಥವಾಗಲಿ ಎಂದು. ಪ್ಯಾನೆಲ್ ಡಿಸಕ್ಷನ್ ನಿಂದ ಹೊರಬರುವಾಗ ಈ ಸೆಲ್ಫಿ ಪೋಟೋ ತೆಗೆದು ಕೊಂಡು. ಇಷ್ಟೇಲ್ಲಾ ಬರೆದೆ. 
{SFI ಮುಖಂಡ}

Comments

Popular posts from this blog

ಬಾಬಾ ಸಾಹೇಬರ ಈ 10 ನುಡಿಗಳು ಯಾವುದೇ ಸಮಾಜವನ್ನು ಬದಲಾಯಿಸಬಲ್ಲವು!

ಹಾಶಿಂಪುರ ಹತ್ಯಾಕಾಂಡಕ್ಕೆ 31 ವರ್ಷಗಳು.!