ಭಯದ ಮಾರಾಟಗಾರ ಟಿವಿ ಆಂಕ್ಯರ್..!
ಭಯದ_ಮಾರಾಟಗಾರ...! ಆಂಕ್ಯರ್ ಅಜಿತ್_ಹನುಮಕ್ಕನವರ್... ಸುವರ್ಣ ನ್ಯೂಸ್ ನಲ್ಲಿ " ಸೈನಿಕರ ಸಾವು ಮತ್ತು ರಾಜಕೀಯ"( ಪಾಕಿಸ್ತಾನದ ಜೊತೆ ಯುದ್ಧ ನಡೆದರೆ BJP 22 ಲೋಕಸಭಾ ಸ್ಥಾನಗಳಲ್ಲಿ ಗೆಲ್ಲುತ್ತದೆ ಎಂದು ಹೇಳಿಕೆ ನೀಡಿದ್ದ ಯಡಿಯೂರಪ್ಪ) ಎಂಬ ವಿಷಯದ ಹಿನ್ನೆಲೆಯಲ್ಲಿ ಸಂಜೆ 07-ರಿಂದ 08 ಗಂಟೆ ವರೆಗೆ ಪ್ಯಾನೆಲ್ ಡಿಸಕ್ಷನ್ ಗೆ ನನ್ನನ್ನು ಕರೆಯಲಾಗಿತ್ತು. 07 ಗಂಟೆಗೆ ನನ್ನ ಜೊತೆಗೆ ಮಾಜಿ ಯೋಧರೊಬ್ಬರು, ಆಂತರಿಕ ಭದ್ರತಾ ಸಲಹೆಗಾರ ....? ಹೆಗಡೆ ಮೂರು ಜನ ಪ್ಯಾನೆಲ್ ಡಿಸಕ್ಷನ್ ನಲ್ಲಿ ಭಾಗವಹಿದ್ದೇವು. 07 ಯಿಂದ 7:50 ವರೆಗೂ ದೆಹಲಿಯಿಂದ Breaking News ಬರುತ್ತಿದೆ ಎಂದು. ನಮ್ಮನ್ನು ಪ್ಯಾನೆಲ್ ನಲ್ಲೇ ಕುರಿಸಿಕೊಂಡು. ಈ ಅಜಿತ್ ವಾಕರಿಕೆ ತರಿಸುವ ರೀತಿಯಲ್ಲಿ ಅವೇಶದ, ಪ್ರಚೋದಿತಾ.. ಬೆಂಕಿ ಉಗುಳುವ ಬ್ರೇಕಿಂಗ್ ನ್ಯೂಸ್ ವಿಶ್ಲೇಷಣೆ ಶುರು ಮಾಡಿದ. ಆಗಾಗ ಬ್ರೆಕ್ ಮಧ್ಯೆ ತುಂಬಾ ದಣಿದು ನೀರು ಕುಡಿದು ಸುಧಾರಿಸಿಕೊಳ್ಳುವ ಈತ ಸಹಜವಾಗಿ ಸೌಮ್ಯವಾಗಿಯೇ ಇದ್ದಾನೆ. ಆದರೆ ಉದ್ದೇಶಪೂರ್ವಕವಾಗಿಯೇ ರೋಚಕವಾಗಿ, ಗಟ್ಟಿ ಧ್ವನಿಯಲ್ಲಿ, ಕಿರುಬನ ರೀತಿ ಕಿರಿಚಾಡುತ್ತಾನೆ.ಈತ ಟಿಆರ್ಪಿ ಗಾಗಿ ಅಥವಾ ಯಾವುದೋ ಕೃತಕ ನಿರ್ದೇಶನದಂತೆ ಸ್ಟೂಡಿಯೋ ದಲ್ಲಿ ಕಿರುಚಾಡುತ್ತಿರುವುದು ಎಂದು ಸಹಜವಾಗಿ ಅರ್ಥವಾಯಿತು. ಈತನು ಬ್ರೇಕಿಂಗ್ ನ್ಯೂಸ್ ನಲ್ಲಿ ಓದುವ ಸ್ಕ್ರೀಪ್ಟ್ ಗಳು RSS ಕಛೇರಿ ಕೇಶವ ಕೃಪಾ ದಲ್ಲಿ ಸಿದ್ದವಾಗಿ ಬರುತ್ತಿರ