Posts

Showing posts from September, 2018

ಗೌರಿ ಲಂಕೇಶ್

Image
ಗೌರಿ_ಲಂಕೇಶ್_ಕೊಲೆಗೆ_ಮಾಡಲಾಗಿತ್ತು_ಒಂದುವರ್ಷದ_ಮಾಸ್ಟರ್_ಪ್ಲ್ಯಾನ್ ! ಸನಾತನ ಸಂಸ್ಥೆ (ಹಿಂದುತ್ವ ಭಯೋತ್ಪಾಧಕ ಸಂಘಟನೆ ) ನಾಲ್ವರು ಪ್ರಗತಿಪರ ಚಿಂತಕರ ಹತ್ಯೆ ನಡೆಸಿದೆ. ಈ ಸಂಘಟನೆಯಲ್ಲಿ ಸನಾತನ ಸಂಸ್ಥೆ, ಹಿಂದೂ ಜನಜಾಗೃತಿ ಸಮಿತಿ ಹಾಗೂ ಅನೇಕ ಇತರ ಬಲಪಂಥೀಯ ಸಂಘಟನೆಗಳ ಸದಸ್ಯರು ಶಾಮೀಲಾಗಿದ್ದಾರೆ ಎಂದು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಸಿಟ್) ಮಾಹಿತಿ ನೀಡಿದೆ ಎಂದು ಇಂಡಿಯಾ ಟುಡೆ ಆಂಗ್ಲ ಸುದ್ದಿ ಮಾಧ್ಯಮದ ಎಕ್ಸ್‌ಕ್ಲೂಸಿವ್ ವರದಿ ತಿಳಿಸಿದೆ. ಗೌರಿ ಲಂಕೇಶ್ ಹತ್ಯೆಯಲ್ಲಿ ಭಾಗಿಯಾಗಿರುವ ಅಮೋಲ್ ಕಾಳೆ ಹಿಂದೂ ಜನಜಾಗೃತಿ ಸಮಿತಿಯ ಮಾಜಿ ಸಂಚಾಲಕನಾಗಿದ್ದರೆ ಇನ್ನೊರ್ವ ಆರೋಪಿ ಅಮಿತ್ ದೆಗ್ವೆಕರ್ ಸನಾತನ ಸಂಸ್ಥೆಯ ಕಾರ್ಯಕರ್ತನಾಗಿದ್ದಾನೆ. ಈ ಅನಾಮಧೇಯ ಸಂಘಟನೆಯಲ್ಲಿ 60 ಸದಸ್ಯರಿದ್ದು ದೇಶಾದ್ಯಂತದ 26 ಹೆಸರುಗಳು ಇವರ ಹಿಟ್ ಲಿಸ್ಟ್‌ನಲ್ಲಿದೆ ಎಂದು ತಿಳಿಸಿರುವ ಸಿಟ್ ಈ ಪೈಕಿ 14 ಹೆಸರುಗಳನ್ನು ಮಹಾರಾಷ್ಟ್ರ ಪೊಲೀಸ್ ಮತ್ತು ಭಯೋತ್ಪಾದನೆ ನಿಗ್ರಹ ಪಡೆಯೊಂದಿಗೆ ಹಂಚಿಕೊಂಡಿದೆ. ಇತ್ತೀಚೆಗೆ ಕರ್ನಾಟಕ ಸಿಟ್ ನೀಡಿದ ಮಾಹಿತಿ ಆಧಾರದಲ್ಲಿ ಮುಂಬೈಯಲ್ಲಿ ಹಲವು ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರನ್ನು ಬಂಧಿಸಲಾಯಿತು. ಮಾಹಿತಿಯ ಪ್ರಕಾರ ಬಂಧಿತರಿಂದ ಬೃಹತ್ ಪ್ರಮಾಣದಲ್ಲಿ ಡಿಟೊನೇಟರ್‌ಗಳು ಮತ್ತು ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ. ಗೌರಿ ಹತ್ಯೆಯನ್ನು ಜಾಲಾಡಿದಾಗ 201