Posts

Showing posts from July, 2018

ಹಿಂದೂ ತಾಲಿಬಾನಿಗರಿಂದ ಬಾಬರಿ ಮಸೀದಿ ಧ್ವಂಸ -ಸುಪ್ರೀಂಕೋರ್ಟ್

Image
ಬೆಳಗ್ಗೆಯಷ್ಟೇ ವಿವಾದಿತ ಪ್ರದೇಶದ ಮೂರನೇ ಒಂದು ಭಾಗದಷ್ಟು ಭೂಮಿ ನೀಡಲು ಸಿದ್ಧ ಎಂದು ಹೇಳಿದ್ದ ಶಿಯಾ ಸಮಿತಿ 14 Jul 2018 ನವದೆಹಲಿ: ಹಿಂದೂ ತಾಲಿಬಾನಿಗಳು ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಿದರು ಎಂದು ಸುಪ್ರೀಂ ಕೋರ್ಟ್ ತನ್ನ ಅಸಮಾಧಾನ ವ್ಯಕ್ತಪಡಿಸಿದೆ. ಬಾಬ್ರಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಡೆದ ವಿಚಾರಣೆಯಲ್ಲಿ ಬಾಬ್ರಿ ಮಸೀದಿ ಧ್ವಂಸ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಅಶೋಖ್ ಭೂಷಣ್ ಮತ್ತು ಎಸ್ ಅಬ್ದುಲ್ ನಜೀರ್ ನೇತೃತ್ವದ ತ್ರಿಸದಸ್ಯ ಪೀಠ ಬಾಬ್ರಿ ಮಸೀದಿ ಧ್ವಂಸಗೊಳಿಸಿದ ಸಂಘಪರಿವಾರದ ಸದಸ್ಯರ ವಿರುದ್ಧ ಕಿಡಿಕಾರಿತು. ಆಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಬುದ್ಧನ ವಿಗ್ರಹವನ್ನು ಧ್ವಂಸಗೊಳಿಸಿದಂತೆಯೇ ಇಲ್ಲಿ ಬಾಬ್ರಿ ಮಸೀದಿಯನ್ನು ಹಿಂದೂ ತಾಲಿಬಾನಿಗಳು ಧ್ವಂಸಗೊಳಿಸಿದರು. ಯಾವುದೇ ಧರ್ಮ, ಸಂವಿಧಾನ ಮತ್ತುಸಂಸ್ಕೃತಿ ಮಸೀದಿ, ದೇಗುಲಗಳಂತಹ ಧಾರ್ಮಿಕ ಕಟ್ಟಡಗಳನ್ನು ಧ್ವಂಸಗೊಳಿಸುವಂತೆ ಹೇಳಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳಗ್ಗೆ ಶಿಯಾ ವಕ್ಫ್ ಸಮಿತಿ ವಿವಾದ ಸ್ಥಳದ ಮೂರನೇ ಒಂದು ಭಾಗವನ್ನು ನೀಡಲು ಸಿದ್ಧವಿರುವ ಕುರಿತು ಹೇಳಿಕೆ ನೀಡಿದ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಇಂತಹ ಹೇಳಿಕೆ ನೀಡಿದೆ.

ಮಅದನಿ ನ್ಯಾಯ ಮರೀಚಿಕೆಯೇ.!

Image
ಮಅದನಿ ಎಂಬ ಮುಸ್ಲಿಂ ನಾಯಕ ಹಾಗೂ ಧರ್ಮ ಗುರುವಿನ ಕರಾಳ ಕತೆ ಆರೋಪಿ (ಮಅದನಿಗೆ) ಗೊತ್ತಿಲ್ಲದ ತಮಿಳು ಭಾಷೆಯಲ್ಲಿ ಬರೆಯಲ್ಪಟ್ಟ 52 kg ಭಾರದ ಆರೋಪ ಪಟ್ಟಿ,ಅರೆಸ್ಟ್ ಮಾಡಿದ ಎರಡು ವರ್ಷದ ನಂತರ ಅಧಿಕೃತವಾಗಿ ಕೇಸ್ ಫೈಲ್ ಮಾಡಲಾಯಿತು.ಬಹುಷಃ ಇತಿಹಾಸದಲ್ಲೇ ಪ್ರಪ್ರಥಮವಾಗಿರಬೇಕು ಜೈಲಿಗಟ್ಟಿದ ಐದು ವರ್ಷದ ನಂತರವಷ್ಟೇ 'ವಿಚಾರಣೆ' ಕೂಡಾ ನಡೆಯುವುದು.ಜೀವನದ ಮೂರರಲ್ಲೊಂದು ಭಾಗ ಜೈಲಿನಲ್ಲೇ ಕೊಳೆಯಬೇಕಾದ ದುರವಸ್ಥೆ.. ಅಂಧತ್ವ ಭಾದಿಸಲ್ಪಟ್ಟ ಕಣ್ಣುಗಳು,ಡಯಾಬಿಟಿಸ್,ಪ್ರೆಶರ್,ಹೃದಯ ಸಂಬಂಧೀ ರೋಗಗಳು,ರಾಜಕೀಯ ಎದುರಾಳಿಗಳ ಆಕ್ರಮಣದಿಂದ ಬಲಕಾಲು ನಷ್ಟ ಹೊಂದಿ  ವೀಲ್ಚಯರ್'ನಲ್ಲೇ ಜೀವಿಸುವ ಮನುಷ್ಯ.ಕೆಲವು ಕುತಂತ್ರಿಗಳಿಂದ ಸೃಷ್ಟಿಸಲ್ಪಟ್ಟ ಕೃತಕ ಪುರಾವೆಗಳ ಪೊಳ್ಳು ಆರೋಪಗಳಿಗೆ ಬದುಕಿನ ಬಹುತೇಕ ದಿನಗಳನ್ನು ಜೈಲಿನ ಕತ್ತಲಕೋಣೆಯಲ್ಲಿ ಕಳೆಯಬೇಕಾಗಿ ಬಂದ ಹತಭಾಗ್ಯ.. ಈ ಮೇಲಿನ ವಿವರಣೆ 'ಗ್ವಾಂಟೆನಾಮೋ' ಕಾರಾಗೃಹದಲ್ಲಿ ಬಂಧಿತನಾಗಿರುವ ಯಾವುದೋ ಆಫ್ರಿಕನ್ ಅಪರಾಧಿಯ ಕುರಿತೇನೂ ಅಲ್ಲ ಬದಲು ನೀತಿ ನ್ಯಾಯ ವ್ಯವಸ್ಥೆಯ ಸುಂದರ ಸಂವಿಧಾನವನ್ನು ಹೊಂದಿರುವುದಕ್ಕೆ ಹೆಮ್ಮೆ ಪಡುವ ನಮ್ಮದೇ ದೇಶದ ಇತಿಹಾಸದಲ್ಲೇ ಕಾನೂನಿನ ಕುತಂತ್ರದೊಳಗೆ ಸಿಲುಕಿ ಸಮಾನತೆಗಳಿಲ್ಲದ ಮಾನವ ಹಕ್ಕು ಉಲ್ಲಂಘನೆಗಳ ಸರಮಾಲೆಗಳನ್ನೇ ಅನುಭವಿಸಲ್ಪಟ್ಟ 'ಅಬ್ದುನ್ನಾಸರ್  ಮಅದನಿ' ಎಂಬ ಮನುಷ್ಯನ ಕುರಿತಾಗಿದೆ. ಜೈಲು ಜೀವನ ಕರ್ನಾಟಕಕ್ಕೆ ಸ್ಥಳಾಂತರಗೊ