ಮಅದನಿ ನ್ಯಾಯ ಮರೀಚಿಕೆಯೇ.!

ಮಅದನಿ ಎಂಬ ಮುಸ್ಲಿಂ ನಾಯಕ ಹಾಗೂ ಧರ್ಮ ಗುರುವಿನ ಕರಾಳ ಕತೆ

ಆರೋಪಿ (ಮಅದನಿಗೆ) ಗೊತ್ತಿಲ್ಲದ ತಮಿಳು ಭಾಷೆಯಲ್ಲಿ ಬರೆಯಲ್ಪಟ್ಟ 52 kg ಭಾರದ ಆರೋಪ ಪಟ್ಟಿ,ಅರೆಸ್ಟ್ ಮಾಡಿದ ಎರಡು ವರ್ಷದ ನಂತರ ಅಧಿಕೃತವಾಗಿ ಕೇಸ್ ಫೈಲ್ ಮಾಡಲಾಯಿತು.ಬಹುಷಃ ಇತಿಹಾಸದಲ್ಲೇ ಪ್ರಪ್ರಥಮವಾಗಿರಬೇಕು ಜೈಲಿಗಟ್ಟಿದ ಐದು ವರ್ಷದ ನಂತರವಷ್ಟೇ 'ವಿಚಾರಣೆ' ಕೂಡಾ ನಡೆಯುವುದು.ಜೀವನದ ಮೂರರಲ್ಲೊಂದು ಭಾಗ ಜೈಲಿನಲ್ಲೇ ಕೊಳೆಯಬೇಕಾದ ದುರವಸ್ಥೆ..
ಅಂಧತ್ವ ಭಾದಿಸಲ್ಪಟ್ಟ ಕಣ್ಣುಗಳು,ಡಯಾಬಿಟಿಸ್,ಪ್ರೆಶರ್,ಹೃದಯ ಸಂಬಂಧೀ ರೋಗಗಳು,ರಾಜಕೀಯ ಎದುರಾಳಿಗಳ ಆಕ್ರಮಣದಿಂದ ಬಲಕಾಲು ನಷ್ಟ ಹೊಂದಿ  ವೀಲ್ಚಯರ್'ನಲ್ಲೇ ಜೀವಿಸುವ ಮನುಷ್ಯ.ಕೆಲವು ಕುತಂತ್ರಿಗಳಿಂದ ಸೃಷ್ಟಿಸಲ್ಪಟ್ಟ ಕೃತಕ ಪುರಾವೆಗಳ ಪೊಳ್ಳು ಆರೋಪಗಳಿಗೆ ಬದುಕಿನ ಬಹುತೇಕ ದಿನಗಳನ್ನು ಜೈಲಿನ ಕತ್ತಲಕೋಣೆಯಲ್ಲಿ ಕಳೆಯಬೇಕಾಗಿ ಬಂದ ಹತಭಾಗ್ಯ..

ಈ ಮೇಲಿನ ವಿವರಣೆ 'ಗ್ವಾಂಟೆನಾಮೋ' ಕಾರಾಗೃಹದಲ್ಲಿ ಬಂಧಿತನಾಗಿರುವ ಯಾವುದೋ ಆಫ್ರಿಕನ್ ಅಪರಾಧಿಯ ಕುರಿತೇನೂ ಅಲ್ಲ ಬದಲು ನೀತಿ ನ್ಯಾಯ ವ್ಯವಸ್ಥೆಯ ಸುಂದರ ಸಂವಿಧಾನವನ್ನು ಹೊಂದಿರುವುದಕ್ಕೆ ಹೆಮ್ಮೆ ಪಡುವ ನಮ್ಮದೇ ದೇಶದ ಇತಿಹಾಸದಲ್ಲೇ ಕಾನೂನಿನ ಕುತಂತ್ರದೊಳಗೆ ಸಿಲುಕಿ ಸಮಾನತೆಗಳಿಲ್ಲದ ಮಾನವ ಹಕ್ಕು ಉಲ್ಲಂಘನೆಗಳ ಸರಮಾಲೆಗಳನ್ನೇ ಅನುಭವಿಸಲ್ಪಟ್ಟ 'ಅಬ್ದುನ್ನಾಸರ್  ಮಅದನಿ' ಎಂಬ ಮನುಷ್ಯನ ಕುರಿತಾಗಿದೆ.

ಜೈಲು ಜೀವನ ಕರ್ನಾಟಕಕ್ಕೆ ಸ್ಥಳಾಂತರಗೊಂಡು ವರ್ಷಗಳುರುಳುತ್ತಿದ್ದರೂ ಮಅದನಿಯ ಮೇಲಿನ ಹಿಂಸೆ ಮುಂದುವರಿಯುತ್ತಲೇ ಇದೆ.ವಿಚಾರಣೆಗೈಯಲು ನ್ಯಾಯಧೀಶರು ಸಿಗುತ್ತಿಲ್ಲವೆಂಬ ನೆಪ ಪ್ರಕರಣದ ಸ್ಥಿತಿಯನ್ನು ಆಮೆಗತಿಯಿಂದ ನಿಶ್ಚಲ ಸ್ಥಿತಿಗೆ ತಲುಪಿಸಿದೆ.ಭಯೋತ್ಪಾದಕನಾಗಿ ಮುದ್ರೆಯೊತ್ತಲ್ಪಟ್ಟ ಈ ಒಂಟಿ ಕಾಲಿನ ಮನುಷ್ಯನಿಗೆ ಎಷ್ಟು ಸಾಧ್ಯವೋ ಅಷ್ಟು ಕಿರುಕುಳ ನೀಡಲೇಬೇಕೆನ್ನುವ ವ್ಯವಸ್ಥೆಯ ಹಿಂದಿನ ಕರಾಳ ಹಸ್ತಗಳಿಂದ ಮಅದನಿಗೆ ಮುಕ್ತಿ ಎನ್ನುವುದು ಮರೀಚಿಕೆಯೇ ?ಹಳೆಯ ಪ್ರಕರಣದಂತೆ ಈ ಪ್ರಕರಣದಲ್ಲೂ ಪುರಾವೆಗಳು ಇಲ್ಲ.ಎರಡನೆಯದಾಗಿ ಸಮರ್ಪಿಸಲ್ಪಟ್ಟ ಪ್ರತ್ಯೇಕ ಪಟ್ಟಿಯಲ್ಲಾಗಿದೆ ಮಅದನಿಗೆ ಆರೋಪಿ ಪಟ್ಟ.ಸುಳ್ಳು ಸಾಕ್ಷಿ ನುಡಿದ ನಾಲ್ಕು ಮಂದಿಗೆ ಈಗ ಮೃಷ್ಟಾನ್ನ ಭೋಜನ.ಅಂಧತ್ವ ಭಾದಿಸಲ್ಪಟ್ಟ ಕಣ್ಣುಗಳೊಂದಿಗೆ ಒಂಟಿ ಕಾಲಿನ ವ್ಯಕ್ತಿ ವೀಲ್ಚಯರಿನಲ್ಲಿ ಕುಳಿತು ಕೊಡಗಿಗೆ ಹೊಗಿ ಅಲ್ಲಿ ಪ್ರಕರಣದ ಮುಖ್ಯ ಸೂತ್ರಧಾರ ನಸೀರ್ ಎಂಬಾತನೊಂದಿಗೆ ಬೆಂಗಳೂರು ಬಾಂಬ್ ಸ್ಪೋಟಕ್ಕೆ ಸಂಚು ರೂಪಿಸಿದ್ದಾರೆ ಎಂದು ಹೇಳದೇ ಹೇಳುವ ಪ್ರಾಸಿಕ್ಯೂಷನ್ ಮನಸ್ಥಿತಿಗೆ ನನ್ನ ನಡು ಬೆರಳಿನ ನಮಸ್ಕಾರವಿರಲಿ.ತೀವ್ರವಾಗಿ ಹದಗೆಟ್ಟಿರುವ ಆರೋಗ್ಯ ಸ್ಥಿತಿ,ಬಹುತೇಕ ನಿಶ್ಚಲಗೊಂಡಿರುವ ಪ್ರಕರಣದ ವಿಚಾರಣೆ ಇವೆರಡು ಮಅದನಿಯನ್ನು ಮಾನಸಿಕವಾಗಿಯೂ ಕುಗ್ಗಿಸಿದೆ.

ಈ ಕೆಳಗಿನ ಪೇಪರ್ ಕಟ್ಟಿಂಗ್ ಒಂಬತ್ತು ವರ್ಷಗಳ ಕಾಲ ಪಾತಕಿಯಾಗಿಯೂ ಭಯೋತ್ಪಾದಕನಾಗಿಯೂ ಮುದ್ರೆಯೊತ್ತಲ್ಪಟ್ಟು ಒಂದು ಸುಪ್ರಭಾತದಲ್ಲಿ ಎಲ್ಲಾ ಆರೋಪಗಳಿಂದ ಮುಕ್ತನಾಗಿ ಮೋಚಿಸಲ್ಪಟ್ಟ ಮಅದನಿಯ ಹಳೆಯ ಪ್ರಕರಣದ ವಾರ್ತೆಯ ವಿವರ.ಒಂದಂತೂ ನಿಜ..ಈಗಿನ ಪ್ರಕರಣಕ್ಕೂ ಅದೇ ರೀತಿಯ ಶುಭ ಸಮಾಪ್ತಿ ಸಿಗುವ ಆತಂಕ ಆಡಳಿತ ವರ್ಗಕ್ಕೂ ಪ್ರಕರಣದ ಹಿಂದಿನ ರೂವಾರಿಗಳಿಗೂ ಇದೆ.ಅದರಿಂದಾಗಿಯೇ ಪ್ರಕರಣ ಕೊನೆಯಿಲ್ಲದ ಕಾದಂಬರಿಯಂತೆ ಮುಂದುವರಿದಷ್ಟೂ ಅವರಿಗೆ ಉತ್ತಮ.ಅದಕ್ಕೆ ಬೇಕಾದ ಅಸ್ತ್ರಗಳೆಲ್ಲವೂ ಅವರ ಬತ್ತಳಿಕೆಯಲ್ಲಿದೆ.
ಮಅದನಿಗೂ ಮಅದನಿಯಂತೆ ಪೊಳ್ಳು ಆರೋಪಗಳಿಗೆ ಬಲಿಪಶುವಾಗಿ ಜೈಲಿನಲ್ಲಿ ಕೊಳೆಯುತ್ತಿರುವ ಹಲವಾರು ಅಮಾಯಕರಿಗೂ ನ್ಯಾಯ ಸಿಗುವ ಭರವಸೆ ನಮ್ಮೊಳಗೆ ಇನ್ನೂ ಜೀವಂತವಾಗಿದೆ.ಅದು ಶೀಘ್ರ ಸಾಕಾರಗೊಳ್ಳಲೆಂದು ಮನದಾಳದಿಂದ ಹಾರೈಸುತ್ತಿದ್ದೇನೆ.‌.

Justice delayed is will not only be justice denied.it will be the rule of law destroyed !

(Adv sreejith perumana ಬರಹ ಕೆಲ ತಿದ್ದುಪಡಿಗಳೊಂದಿಗೆ ಕನ್ನಡಕ್ಕೆ-ಶಂಸ್ ಗಡಿಯಾರ್)

Comments

Popular posts from this blog

ಬಾಬಾ ಸಾಹೇಬರ ಈ 10 ನುಡಿಗಳು ಯಾವುದೇ ಸಮಾಜವನ್ನು ಬದಲಾಯಿಸಬಲ್ಲವು!

ಹಾಶಿಂಪುರ ಹತ್ಯಾಕಾಂಡಕ್ಕೆ 31 ವರ್ಷಗಳು.!

ಜಿಹಾದ್ ಎಂದರೇನು..!?